ಚಪ್ಪಲಿ ಹಾಕಿ ದೇವಾಲಯ ಪ್ರವೇಶ: ನಾಲ್ವರ ಬಂಧನ

ಶುಕ್ರವಾರ, 5 ನವೆಂಬರ್ 2021 (09:27 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಾರಿಂಜ ದೇವಸ್ಥಾನಕ್ಕೆ ಚಪ್ಪಲಿ ಧರಿಸಿ ನಾಲ್ವರು ಯುವಕರು ಪ್ರವೇಶಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ.

ಬುಷರ್ ರೆಹಮಾನ್,  ಇಸ್ಮಾಯಿಲ್ ಅರ್ಹ್ಮಾಜ್,  ಮುಹಮ್ಮದ್ ತನಿಶ್, ಮೊಹಮ್ಮದ್ ರಶದ್ ಎಂಬ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಇವರು ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸಿದ ವಿಡಿಯೋ ವೈರಲ್ ಆಗಿತ್ತು.

ಈ ಸಂಬಂಧ ದೇವಾಲಯ ಆಡಳಿತ ಸಮಿತಿ ಪೊಲೀಸರಿಗೆ ದೂರು ನೀಡಿತ್ತು. ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಯುವಕರ ವಿರುದ್ಧ ದೇವಾಲಯ ಆಡಳಿತ ಮಂಡಳಿ ದೂರು ನೀಡಿತ್ತು. ಅದರಂತೆ ನಾಲ್ವರನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ