ಗೋಲಿಬಾರ್ ಮಾಡಿದ ಪೊಲೀಸರಿಗೆ ಲಕ್ಷ ಲಕ್ಷ ರೂಪಾಯಿ ಬಹುಮಾನ

ಗುರುವಾರ, 26 ಡಿಸೆಂಬರ್ 2019 (15:26 IST)
ಮಂಗಳೂರು ಗಲಭೆಯಲ್ಲಿ ಗೋಲಿಬಾರ್ ಮಾಡಿರೋ ಪೊಲೀಸರು ಭಾರೀ ನಗದು ಬಹುಮಾನ ಕೊಡಲಾಗಿದೆ.

ಹೀಗಂತ ನಕಲಿ ಸುದ್ದಿಯೊಂದು ಹರಿದಾಡಲಾರಂಭಿಸಿದೆ.

ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಸಮಯದಲ್ಲಿ ಕರ್ತವ್ಯ ನಿರ್ವಹಣೆ ಮಾಡಿ ಶಾಂತಿ ಕಾಪಾಡಲು ಯತ್ನಿಸಿದ 148 ಪೊಲೀಸ್ ಸಿಬ್ಬಂದಿಗೆ 10 ಲಕ್ಷ ನಗದು ಬಹುಮಾನ ಕೊಡಲಾಗಿದೆ.

ಹೀಗಂತ ನಕಲಿ ಪತ್ರವೊಂದು ಹರಿದಾಡಲಾರಂಭಿಸಿದೆ.

ಈ ಸುದ್ದಿಗೆ ಸ್ಪಷ್ಟನೆ ನೀಡಿರೋ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ, ಇಲಾಖೆ ಹೆಸರಲ್ಲಿ ಕೆಲವು ಜನರು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ ಅಂತ ಹೇಳಿದ್ದಾರೆ. ಯಾವುದೇ ಬಹುಮಾನ ಬಂದಿಲ್ಲ. ಹರಿದಾಡುತ್ತಿರೋದು ಸುಳ್ಳು ಸುದ್ದಿ ಅಂತ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ