ವಿಶ್ವಾಸ ಮತ ಸಾಬೀತಿಗೆ 1.30 ರ ಡೆಡ್ ಲೈನ್ ನೀಡಿದ ರಾಜ್ಯಪಾಲರು
ಆದರೆ ಬಿಜೆಪಿ ರಾಜ್ಯಪಾಲರ ಬಳಿ ತೆರಳಿ ಆಡಳಿತ ಪಕ್ಷದ ಸದಸ್ಯರು ವಿಶ್ವಾಸ ಮತ ಯಾಚಿಸುವ ಮುಖ್ಯ ಅಜೆಂಡಾ ಬಿಟ್ಟು ಬೇರೆ ಚರ್ಚೆ ನಡೆಸುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ದೂರಿದ ಹಿನ್ನಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿದ್ದಾರೆ. ಹೀಗಾಗಿ ಇಂದು ಸಿಎಂ ವಿಶ್ವಾಸ ಮತ ಯಾಚನೆ ಮಾಡಬೇಕಿದೆ. ಅದರ ನಡುವೆ ಕಾಂಗ್ರೆಸ್ ವಿಪ್ ಬಗ್ಗೆ ಎತ್ತಿರುವ ಸಂಶಯದ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ ಈ ಡೆಡ್ ಲೈನ್ ಏನಾಗಬಹುದು ಎಂದು ಕಾದುನೋಡಬೇಕಿದೆ.