ಹಾವೇರಿ ಗೋಲಿಬಾರ್ ಗೆ 12 ವರ್ಷ

ಸೋಮವಾರ, 10 ಜೂನ್ 2019 (20:59 IST)
ಹಾವೇರಿ ಗೋಲಿಬಾರಿಗೆ ಹನ್ನೆರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆ  ಆಚರಿಸಲಾಯಿತು.

12ನೇ ವರ್ಷದ ಕರಾಳ ದಿನ ಆಚರಣೆಯನ್ನು ರೈತರು ಮಾಡಿದ್ರು. ಹಾವೇರಿ ಸಿದ್ದಪ್ಪ ವೃತ್ತದಲ್ಲಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ  ಮೌನಾಚರಣೆ ಮಾಡುವ ಮೂಲಕ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ರೈತರು.

2008 ರಲ್ಲಿ ಗೊಬ್ಬರ ವಿಷಯಕ್ಕೆ ನಡೆದಿದ್ದ ಗೋಲಿಬಾರ್ ನಲ್ಲಿ ರೈತರು ಹುತಾತ್ಮರಾಗಿದ್ದರು.

ಪೊಲೀಸರು ಹಾರಿಸಿದ ಗುಂಡಿಗೆ ರೈತ  ಪುಟ್ಟಪ್ಪ ಹೊನ್ನತ್ತಿ  ಹಾಗೂ ಸಿದ್ದಲಿಂಗಪ್ಪ ಚೂರಿ ಹುತಾತ್ಮರಾಗಿದ್ದರು. ಹುತಾತ್ಮರಾದ ರೈತರ ನೆನಪಿಗೋಸ್ಕರ ರೈತ ಹುತಾತ್ಮ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದಾರೆ ರೈತರು.

12ನೇ ವರ್ಷದ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ರಸ್ತೆ ತಡೆ ಹಾಗೂ ಹಕ್ಕೊತ್ತಾಯ ಮಾಡಲಾಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ