ಸರ್ವಪಕ್ಷಗಳ ಸಭೆ ಕರೆದ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಗರಂ

ಬುಧವಾರ, 14 ಏಪ್ರಿಲ್ 2021 (13:44 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ  ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ.  ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಕೊವಿಡ್ ಚಿಕಿತ್ಸೆಗೆ ಮೂಲಸೌಕರ್ಯ ಹೊಂದಿಸಿಲ್ಲ. ಸೋಂಕು ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಂಡಿಲ್ಲ. ಎಲ್ಲ ಎಚ್ಚರಿಕೆ ಕಡೆಗಣಿಸಿ ಸಭೆ ನಡೆಸಿ ಏನು ಪ್ರಯೋಜನ? ಕೊರೊನಾ 2ನೇ ಅಲೆಯನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಗಂಭೀರವಾಗಿ ಪರಿಗಣಿಸಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ದೇಶದಲ್ಲಿ ರೆಮ್ ಡಿಸಿವಿರ್  ಇಂಜೆಕ್ಷನ್ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ. ಕೇಂದ್ರ ಇಷ್ಟಬಂದಂತೆ ರೆಮ್ ಡಿಸಿವಿರ್ ರಫ್ತು ಮಾಡಿದೆ ಎಂದು  ಟ್ವೀಟರ್ ನಲ್ಲಿ ಸರ್ಕಾರದ ವಿರಿದ್ಧ  ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಔಷಧಿಗೆ ಅಭಾವ ಎದುರಾಗುತ್ತಲೇ ರಫ್ತು ನಿಷೇಧಿಸಿದೆ. ಈಗ ಕಾಲ ಮಿಂಚಿದೆ, ಕೊರೊನಾ ಹೆಚ್ಚುತ್ತಿದೆ. ಆಸ್ಪತ್ರೆಗಳು ರೆಮ್ ಡಿಸಿವಿರ್ ಗೆ ಕಾಯುವಂತಾಗಿದೆ. ಕಾಳಸಂತೆಯಲ್ಲಿ  ರೆಮ್ ಡಿಸಿವಿರ್  ಮಾರಾಟವಾಗುತ್ತಿದೆ. ಕೇಂದ್ರ –ರಾಜ್ಯ ಕೊವಿಡ್ ವಿಷಯದಲ್ಲಿ ಎಡವಿದೆ ಎಂದು  ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ