ಗಡಿಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಹಿಂಡು; ಜನರು ಗಡಗಡ

ಮಂಗಳವಾರ, 25 ಜೂನ್ 2019 (19:40 IST)
ರಾಜ್ಯದ ಗಡಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದು ಆ ಪ್ರದೇಶದಲ್ಲಿನ ಜನರನ್ನು ಗಡಗಡ ನಡಗುವಂತೆ ಮಾಡಿದೆ.

ತಮಿಳುನಾಡು ಗಡಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿರುವ ಕಾಡಾನೆಗಳ ಹಿಂಡು ರಾಜ್ಯದ ಗಡಿ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಆನೇಕಲ್ ಸಮೀಪದ ಹೊಸೂರು ಬಳಿಯ ಚಿನ್ನರನ ದೊಡ್ಡಿ ಬಳಿ ಕಾಣಿಸಿಕೊಂಡಿವೆ 6 ಕಾಡಾನೆಗಳು.

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಯಿಂದ ಬೆಳೆಗಾರರು, ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಕಾಡಾನೆಗಳನ್ನ ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಹರಸಾಹಸ ಮುಂದುವರಿದಿದೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ