ತನಿಖೆ ಮಾಡಿದ್ರೆ ನ್ಯಾಯ ಸಿಗುವ ಭರವಸೆಯಿದೆ

ಬುಧವಾರ, 5 ಜುಲೈ 2023 (15:40 IST)
40% ಕಮಿಷನ್ ತನಿಖೆ ವಿಚಾರಕ್ಕೆ ಸಂಬಂಧಿಸದಂತೆ ಮಾಜಿ ಸಿಎಂ ಬಸವರಾಜ​​ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, 40% ಅಲಿಗೇಷನ್ ಕುರಿತು ಒಂದೂವರೆ ವರ್ಷದಿಂದ ಆರೋಪ‌ ಮಾಡ್ತಿದ್ದಾರೆ. ಇಲ್ಲಿಯವರೆಗೂ ದಾಖಲೆ ಕೊಟ್ಟಿಲ್ಲ, ತನಿಖೆ ಮಾಡಿದ್ರೆ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು. ಸರ್ಕಾರ ನಿಜವಾಗ್ಲೂ ಭ್ರಷ್ಟಾಚಾರದ ವಿರುದ್ದ ಇದ್ರೆ, ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡ್ತೀನಿ, ಯಾರು ಯಾರು ತಪ್ಪಿತಸ್ಥರು ಇದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದರು.. ಈಗಾಗಲೇ ಹಲವು ಕೇಸ್​​​ಗಳು ಲೋಕಾಯುಕ್ತ ಮುಂದೆ ಇವೆ.. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ವಿರುದ್ದ ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.. ಅದಕ್ಕೆ ಅವರು ದಾಖಲೆನೂ ಕೊಟ್ಟಿಲ್ಲ, ಉತ್ತರನೂ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ