ದಾಖಲೆ ಇದ್ರೆ ಹೋಗಿ ಕೊಡಲಿ-ಸಿ.ಟಿ.ರವಿ

ಬುಧವಾರ, 15 ಫೆಬ್ರವರಿ 2023 (20:00 IST)
ಸ್ವಪಕ್ಷದ ವಿರುದ್ಧವೇ ಗೂಳಿಹಟ್ಟಿ ಶೇಖರ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ‘ಗೂಳಿಹಟ್ಟಿ ಶೇಖರ್‌ ಬಳಿ ದಾಖಲೆ ಇದ್ರೆ ದೂರು ಕೊಡಬಹುದು, ಯಾಕೆ ಗಾಳಿಯಲ್ಲಿ ಗುಂಡು ಹಾರಿಸಬೇಕು? ಇಲ್ಲಿ ಯಾರನ್ನೂ ಕಟ್ಟಿ ಹಾಕಿಲ್ಲ, ದಾಖಲೆ ಇದ್ರೆ ಹೋಗಿ ಕೊಡಲಿ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ಉಪ್ಪು ತಿಂದವ ನೀರು ಕುಡಿಯುತ್ತಾನೆ‌’ ಎಂದು ವಿಧಾನಸಭೆಯಲ್ಲಿ ಸಿ.ಟಿ.ರವಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ