ಐಎಂಎ ಬಹುಕೋಟಿ ರೂ.ವಂಚನೆ ಪ್ರಕರಣ; ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮನ್ಸೂರ್ ಖಾನ್

ಗುರುವಾರ, 12 ಸೆಪ್ಟಂಬರ್ 2019 (11:01 IST)
ಬೆಂಗಳೂರು : ಐಎಂಎ ಸಂಸ್ಥೆಯಿಂದ ಬಹುಕೋಟಿ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಕ್ಕೆ ರಾಜಕಾರಣಿ, ಐಪಿಎಸ್ ಅಧಿಕಾರಿಗಳು ಯತ್ನ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.




ಈಗಾಗಲೇ ಸಿಬಿಐ ವಶದಲ್ಲಿರುವ ಮನ್ಸೂರ್ ಖಾನ್, ತಾನು ಹಣ ನೀಡಿದ್ದಕ್ಕೆ ಹಲವು ದಾಖಲೆಗಳನ್ನು ಇಟ್ಟಿದ್ದೆ. ಆ ದಾಖಲೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.


ಇದನ್ನ ಜಾಲಾಡಲು ಸಿಬಿಐ, 12 ಜನರ ‘ಮಲ್ಟಿ ಡಿಸಿಪ್ಲಿನರಿ ಇನ್ವೆಸ್ಟಿಗೇಷನ್ ‘ ಎಂಬ ವಿಶೇಷ ತಂಡವನ್ನು ರಚಿಸಿದ್ದು, ಇದೀಗ ಈ ತಂಡ ಈ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ