ಬಸವ ತತ್ವದಿಂದ ಭಾರತದ ಪ್ರಜಾಪ್ರಭುತ್ವ ಸದೃಢ : ರಾಹುಲ್ ಗಾಂಧಿ

ಸೋಮವಾರ, 24 ಏಪ್ರಿಲ್ 2023 (11:10 IST)
ಬಾಗಲಕೋಟೆ : ಭಾರತದಲ್ಲಿ ಪ್ರಜಾಪ್ರಭುತ್ವದ ತಳಹದಿಯನ್ನು ಬಸವಣ್ಣನವರ ಚಿಂತನೆಗಳು ಸದೃಢಗೊಳಿಸಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
 
ಕೂಡಲಸಂಗಮದಲ್ಲಿ ಭಾನುವಾರ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಬರಲು ಬಸವಣ್ಣನವರ ಅನುಭವ ಮಂಟಪ ಕಾರಣವಾಗಿದೆ. ಎಲ್ಲಿ ಕತ್ತಲಿದೆಯೋ ಅಲ್ಲೇ ಒಂದು ಕಡೆ ಬೆಳಕಿರುತ್ತದೆ.

ಹಾಗೆಯೇ ಕತ್ತಲು ತುಂಬಿದ ಸಮಾಜಕ್ಕೆ ಬೆಳಕು ನೀಡಿದ ಬಸವಣ್ಣ ಎಲ್ಲಾ ಕಾಲಕ್ಕೂ ದಾರಿದೀಪವಾಗಿದ್ದಾರೆ. ಅವರ ಜಯಂತಿಯ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ