ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಅಂದೇ ಗಮನ ಸೆಳೆದಿದ್ದ ಐಪಿಎಸ್ ಅಧಿಕಾರಿ ಡಿ ರೂಪ

Krishnaveni K

ಸೋಮವಾರ, 26 ಆಗಸ್ಟ್ 2024 (12:57 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಘಟನೆಗಳಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಡಿ ರೂಪ ವರದಿ ನೀಡಿದ್ದರು.

ಈ ಹಿಂದೆ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಲ್ಲಿದ್ದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಡಿ ರೂಪ ತನಿಖೆ ನಡೆಸಿ ವಿಸ್ತೃತ ವರದಿ ನೀಡಿದ್ದರು. ಅವರ ವರದಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಖೈದಿಗಳಿಗೆ ಮೊಬೈಲ್, ಸಿಗರೇಟು ಸೇರಿದಂತೆ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ ಎಂದು ರೂಪ ವರದಿಯಲ್ಲಿ ಹೇಳಿದ್ದರು.

ಈ ಬಗ್ಗೆ ಒಂದು ಎಫ್ ಐಆರ್ ಕೂಡಾ ದಾಖಲಾಗಿತ್ತು. ಆದರೆ ಬಳಿಕ ಡಿ ರೂಪ ಅವರನ್ನೇ ವರ್ಗಾವಣೆ ಮಾಡಲಾಗಿತ್ತು. ಇದೀಗ ದರ್ಶನ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೆ ಜೈಲಿನ ಅಕ್ರಮಗಳು ಬಯಲಾಗಿದೆ. ಅಂದು ರೂಪ ನೀಡಿದ್ದ ವರದಿ ನಿಜವೆಂದು ಮತ್ತೆ ಸಾಬೀತಾಗಿದೆ.

ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಡಿ ರೂಪ ಜೈಲಿನಲ್ಲಿ ಇಂತಹದ್ದಕ್ಕೆಲ್ಲಾ ಅವಕಾಶವಿಲ್ಲ. ನಿಯಮಾವಳಿಗಳ ಪ್ರಕಾರ ಅವರ ಬ್ಯಾರಕ್ ನಲ್ಲಿರಬೇಕು. ಏನಾದರೂ ಕೆಲಸವಿದ್ದಾಗ ಮಾತ್ರ ಹೊರಗಡೆ ಕೂರಲು ಅವಕಾಶವಿರುತ್ತದೆ. ಆದರೂ ಸಿಗರೇಟು, ಕಾಫಿಗೆಲ್ಲಾ ಅವಕಾಶವಿರಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ