ಮಂತ್ರಿಗಿರಿ ಕೊಡದಿದ್ದರೂ ಬಿಜೆಪಿಯಲ್ಲೇ ಇರ್ತೀನಿ

ಸೋಮವಾರ, 10 ಆಗಸ್ಟ್ 2020 (22:46 IST)
ಮಂತ್ರಿಗಿರಿ ಕೊಟ್ಟರೂ ಸರಿ. ಕೊಡದಿದ್ದರೂ ಸರಿ.


ನಾನು ಮಾತ್ರ ಬಿಜೆಪಿಯಲ್ಲೇ ಇರುತ್ತೇನೆ. ಹೀಗಂತ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮತ್ತು ನಿರಾಣಿ ಗ್ರೂಪ್ ಅಧ್ಯಕ್ಷ ಮುರುಗೇಶ್ ನಿರಾಣಿ ಹೇಳಿಕೊಂಡಿದ್ದಾರೆ.

ವಿವಿಧೆಡೆ ಐದು ಸಕ್ಕರೆಗಳನ್ನು ನಾನು ಶಾಸಕನಾಗಿಯೇ ನಡೆಸುತ್ತಿರುವೆ. ಒಂದು ವೇಳೆ ಮಂತ್ರಿಯಾಗಿದ್ದರೆ ಅದಕ್ಕೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಲಾಗುತ್ತಿತ್ತು ಎಂದರು.

ಪಿಎಸ್ ಎಸ್ ಕೆ ಕಾರ್ಖಾನೆಗೆ ಆ.11 ರಂದು ಪೂಜೆ ನಡೆಯಲಿದೆ ಎಂದ ಅವರು, ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯ ಗುತ್ತಿಗೆಯೂ ತಮಗೆ ಸಿಕ್ಕಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ