ಕಾವೇರಿ’ ಕಿಚ್ಚು ಆರಿಸಲು ಹೊಸ ಪೀಠ

ಸೋಮವಾರ, 21 ಆಗಸ್ಟ್ 2023 (17:00 IST)
ಕರ್ನಾಟಕ ತಮಿಳುನಾಡು ಸರ್ಕಾದ ನಡುವಿನ ‘ಕಾವೇರಿ’ ಕಿಚ್ಚು ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್​ನಲ್ಲಿ ತಮಿಳುನಾಡು ಸರ್ಕಾರ, ಈ ಪ್ರಕರಣ ಬಹಳ ತುರ್ತಾಗಿರುವುದರಿಂದ ತಕ್ಷಣ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿತು. ವಿಚಾರಣೆಯಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಇಂದು ಹೊಸ ಪೀಠವನ್ನು ಸ್ಥಾಪಿಸಲಾಗುವುದು ಎಂದು ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಆದೇಶಿಸಿದರು. ಕರ್ನಾಟಕ ಸರ್ಕಾರ ತನ್ನ ವಾದ ಮಂಡಿಸಲು ಮುಂದಾದಾಗ, ನೂತನ ಪೀಠ ರಚನೆಯಾದ ಬಳಿಕ ಮೇಲ್ಮನವಿ ಸಲ್ಲಿಸಿ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ