ಏನು ಸಾಧನೆ ಮಾಡಿದ್ದಾರೆಂದು ಸಿದ್ದರಾಮಯ್ಯ, ಬಿಎಸ್ ವೈ ಪುತ್ರರು ಸ್ಪರ್ಧಿಸುತ್ತಿದ್ದಾರೆ? ಕುಮಾರಸ್ವಾಮಿ ಪ್ರಶ್ನೆ

ಮಂಗಳವಾರ, 3 ಏಪ್ರಿಲ್ 2018 (11:42 IST)
ಹಾಸನ: ಜೆಡಿಎಸ್ ನದ್ದು ವಂಶ ರಾಜಕಾರಣ ಎನ್ನುವ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

‘ಸಿಎಂ ಸಿದ್ದರಾಮಯ್ಯ ಪುತ್ರ ಏನು ಸಾಧನೆ ಮಾಡಿದ್ದಾರೆಂದು ವರುಣಾದಲ್ಲಿ ಸ್ಪರ್ಧಿಸುತ್ತಿದ್ದಾರೆ? ಬಿಎಸ್ ವೈ ಪುತ್ರನಿಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಎತ್ತ ಸಂಬಂಧ? ನಮ್ಮನ್ನು ವಂಶ ರಾಜಕಾರಣ ಮಾಡುವವರು ಎನ್ನುವವರು ಅವರು ಏನು ಮಾಡ್ತಿರೋದು?’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಅಷ್ಟೇ ಅಲ್ಲದೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಬಂದರೂ ನನ್ನದೇ ಗೆಲುವು ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಚಾಮುಂಡೇಶ್ವರಿ ಜನರನ್ನು ಇವರೇನು ಜೇಬಿನಲ್ಲಿ ಇಟ್ಕೊಂಡವ್ರಾ? ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ