‘ಕುಮಾರಸ್ವಾಮಿಗೆ ಬಹಳ ಇರೋದು ಯಡಿಯೂರಪ್ಪಗೆ ಸ್ವಲ್ವವೂ ಇಲ್ವಂತೆ’

ಶುಕ್ರವಾರ, 26 ಜುಲೈ 2019 (14:54 IST)
ಅತೃಪ್ತ ಮೂವರು ಶಾಸಕರನ್ನು ಸ್ಪೀಕರ್ ಕೂಲಂಕುಶವಾಗಿ ಚರ್ಚಿಸಿ ಕಾನೂನು ರೀತಿಯಲ್ಲಿ ಅನರ್ಹ ಮಾಡಿದ್ದಾರೆ. ಹೀಗಂತ ವಿಧಾನ ಪರಿಷತ್ ಹಿರಿಯ ಸದಸ್ಯ ಹೇಳಿದ್ದು, ಇದೇ ವೇಳೆ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.

ಆಪರೇಷನ್ ಕಮಲ ನಡೆಸಿರೋ ಭಾರತೀಯ ಜನತಾ ಪಕ್ಷದಲ್ಲಿ ಟ್ರಬಲ್ ಕ್ರಿಯೇಟರ್ ಗಳೇ ಹೆಚ್ಚಿದ್ದಾರೆ. ಅವರು ಅಥವಾ ಈಗ ಅತೃಪ್ತರಾದವರು ಮುಂದೆಯೂ ಯಾವುದೇ ಸಂದರ್ಭದಲ್ಲಿ ಬಿಜೆಪಿಗೆ ಕೈ ಕೊಡಬಹುದೆಂದು ಹೊಸ ಬಾಂಬ್ ಸಿಡಿಸಿದ್ದಾರೆ.

ತಂತಿ ಮೇಲೆ ನಡೆದಂತೆ ಸರಕಾರ ನಡೆಸೋದು ತುಂಬಾ ಕಷ್ಟ. ಹೀಗಂತ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದು, ಹೆಚ್.ಡಿ.ಕುಮಾರಸ್ವಾಮಿಯವರಿಗೆ ತುಂಬಾ ತಾಳ್ಮೆ ಇದೆ. ಆದರೆ ಬಿ.ಎಸ್.ಯಡಿಯೂರಪ್ಪಗೆ ಅದು ಇಲ್ಲ.
ಆಪರೇಷನ್ ಕಮಲ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದರೂ ಅದರ ಆಯುಷ್ಯ ತುಂಬಾಕಡಿಮೆ ಎಂದು ಹೊರಟ್ಟಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ