ಶಾಸಕ ಜಮೀರ್ ಅಹ್ಮದ್ ಕೆಲಸ ಸಮಾಜಕ್ಕೆ ಮಾರಕ

ಶುಕ್ರವಾರ, 14 ಆಗಸ್ಟ್ 2020 (18:06 IST)
ಶಾಸಕನಾಗಿ ಮಾಡುವ ಕರ್ತವ್ಯಕ್ಕೆ ವಿಮುಖರಾಗಿ ನಡೆಯುವ ಕೆಲಸವನ್ನು ಶಾಸಕ ಜಮೀರ್  ಅಹ್ಮದ್ ಯಾವಾಗಲೂ ಮಾಡುತ್ತಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣ ಕುರಿತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಗಲಭೆಯಲ್ಲಿ ಮೃತರಿಗೆ ಪರಿಹಾರ ನೀಡಬೇಕೆಂದು ಆಗ್ರಹ ಮಾಡಿರುವ ವಿಚಾರಕ್ಕೆ ಸಚಿವ ಶೆಟ್ಟರ್ ಕಿಡಿ‌ಕಾರಿದರು.

ಜಮೀರ್ ಅಹ್ಮದ್ ಅವರಿಗೆ ಕೇವಲ ಜಾತಿ, ಧರ್ಮ ಅನ್ನೋದು ಮಾತ್ರ ಕಾಳಜಿ ಇದೆ. ಸಮಾಜ, ಸಮಾಜದ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಬಗ್ಗೆ ಗೊತ್ತಿಲ್ಲ, ಕಾಳಜಿಯೂ ಅವರಿಗಿಲ್ಲ ಎಂದು ಟೀಕೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ