ತಂದೆ‌ ನೆನೆದು ಭಾವುಕರಾದ ಸಚಿವ ಬೈರತಿ ಬಸವರಾಜ್

ಸೋಮವಾರ, 15 ಆಗಸ್ಟ್ 2022 (18:01 IST)
ನನ್ನ ತಂದೆ ನಿನ್ನೆ ನಿಧನರಾದರು.  ನನಗೆ ದಾವಣಗೆರೆ ಬರಲಿಕ್ಕೆ ಆಗುತ್ತೋ ಇಲ್ಲವೋ ಎಂಬ ಅಳುಕು ಇತ್ತು. ಮಾನಸಿಕವಾಗಿ ತೀವ್ರ ನೊಂದಿದ್ದೆ. ಆದರೂ ಕೂಡ ತಂದೆಯ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ರಾತ್ರಿ 8ಗಂಟೆಗೆ ಬೆಂಗಳೂರು ಬಿಟ್ಟು ದಾವಣಗೆರೆಗೆ ಬಂದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ‌ ಬಸವರಾಜ್ ಹೇಳಿದರು. ದಾವಣಗೆರೆ ಜಿಲ್ಲೆಯ ಜನರ ಜೊತೆಗಿನ ಅವಿನಾವಭಾವ ಸಂಬಂಧ ಇದ್ದ ಕಾರಣಕ್ಕೆ ಬರಲು ಸಾಧ್ಯವಾಯ್ತು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಬೈರತಿ ಭಾವುಕರಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ