ಕುರುಬರ ಕ್ಷಮೆ ಕೇಳೋದಿಲ್ಲ ಎಂದ ಸಚಿವ ಮಾಧುಸ್ವಾಮಿ

ಬುಧವಾರ, 20 ನವೆಂಬರ್ 2019 (18:50 IST)
ಕನಕ ವೃತ್ತ ವಿವಾದದ ಕುರಿತು ಕುರುಬರ ಕ್ಷಮೆಯನ್ನು ನಾನು ಕೇಳೋದಿಲ್ಲ ಅಂತ ಸಚಿವರೊಬ್ಬರು ಖಡಕ್ಕಾಗಿ ಹೇಳಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಚಿವ ಮಾಧುಸ್ವಾಮಿ ಪರವಾಗಿ ಜನತೆಗೆ ಕ್ಷಮೆ ಕೋರಿದ್ದಾರೆ.

ಆದರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತ್ರ ಕುರುಬರ ಕ್ಷಮೆ ಕೇಳೋದಿಲ್ಲ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಏಕ ವಚನದಲ್ಲಿ ಸ್ವಾಮೀಜಿ ಜೊತೆ ಮಾತನಾಡಿಲ್ಲ. ಖಾವಿ ಬಟ್ಟೆ ಧರಿಸಿದವರಿಗೆಲ್ಲರಿಗೂ ಗೌರವ ಕೊಡುವೆ. ನಾನು ವಿಷಾದ ವ್ಯಕ್ತಪಡಿಸುತ್ತೇನೆ, ಆದರೆ ಕ್ಷಮೆ ಕೇಳೋ ಮಾತೇ ಇಲ್ಲ ಅಂತ ಹೇಳಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ