ಕಾಂಗ್ರೆಸ್‌ ಗೆ ರಾಜೀನಾಮೆ ಕೊಟ್ಟ ಶಾಸಕ!

geetha

ಶನಿವಾರ, 20 ಜನವರಿ 2024 (18:00 IST)
ಗುಜರಾತ್‌ : ವಿಜಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಜೆ. ಚಾವಡಾ ಶುಕ್ರವಾರ ಸ್ಪೀಕರ್‌ ಶಂಕರ್‌ ಚೌಧರಿಯವರಿಗೆ ರಾಜೀನಾಮೆ ಪತ್ರ ನೀಡಿದರು. ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಬಗ್ಗೆ ಉಪೇಕ್ಷೆ ತಳೆದಿರುವ ಕಾಂಗ್ರೆಸ್‌ ಪಕ್ಷದ ವರ್ತನಯಿಂದ ಬೇಸತ್ತು ಶಾಸಕರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್‌ ಕಾಂಗ್ರೆಸ್‌ ಶಾಸಕ ಸಿ.ಜೆ. ಚಾವಡಾ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ನಾನು ಕಾಂಗ್ರೆಸ್‌ ಪಕ್ಷಕ್ಕೆ 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ರಾಮಮಂದಿರದ ಗತ ವೈಭವ ಮರಳುತ್ತಿರುವ ಈ ಸುವರ್ಣ ಘಳಿಗೆಯನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ಈ ಸಂಭ್ರಮದಲ್ಲಿ ಭಾಗಿಯಾಗಲು ಕಾಂಗ್ರೆಸ್‌ ನಿರಾಕರಿಸುತ್ತಿದ್ದು, ಅಂಥಾ ಪಕ್ಷದೊಂದಿಗೆ ನಾನು ಇರಲು ಬಯಸುವುದಿಲ್ಲ ಎಂದು ಚಾವಡಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ