ಬರಗಿ ಕೆರೆಗೆ ಬಾಗಿನ‌ ಅರ್ಪಿಸಿದ ಶಾಸಕ‌

ಭಾನುವಾರ, 9 ಸೆಪ್ಟಂಬರ್ 2018 (17:27 IST)
ನಿರಂತರ ಮಳೆಯಿಂದಾಗಿ ಬರಗಿ ಕೆರೆ ತುಂಬಿದ್ದು, ಸ್ಥಳೀಯ ಶಾಸಕ, ದಂಪತಿ ಸಮೇತ ಬಾಗಿನ ಅರ್ಪಿಸಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನಿರಂತರ ಮಳೆಯಿಂದಾಗಿ ಬರಗಿ ಕೆರೆ ತುಂಬಿದ್ದು, ಸ್ಥಳೀಯ ಶಾಸಕ ಸಿ.ಎಸ್.ನಿರಂಜನಕುಮಾರ್ ದಂಪತಿ ಸಮೇತ ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್, ವರುಣನ ಕೃಪೆಯಿಂದ ತಾಲೂಕಿನ ಹಲವು ಕೆರೆಗಳು ತುಂಬ್ಬಿದ್ದು, ರೈತಾಪಿವರ್ಗದಲ್ಲಿ ಹರ್ಷ ಮೂಡಿಸಿದೆ ಎಂದರು.

ಗುಂಡ್ಲುಪೇಟೆ ತಾಲೂಕಿನ ಬಹುತೇಕ ರೈತರು ಮಳೆಯನ್ನೆ  ಆಶ್ರಯಿಸಿದ್ದು, ಕಳೆದ ಹತ್ತು ವರ್ಷಗಳಿಂದ ಬರಗಿ ಸೇರಿದಂತೆ ಅನೇಕ ದೊಡ್ಡ  ಕೆರೆಗಳು ನೀರಿಲ್ಲದೆ ಭಣಗುಡುತ್ತಿದ್ದವು. ಕಳೆದ ಎರಡು ತಿಂಗಳಿಂದ  ಗುಂಡ್ಲುಪೇಟೆಯಲ್ಲಿ ಉತ್ತಮ‌ ಮಳೆಯಾಗುತ್ತಿರುವುದು ಸಂತಸ ತಂದಿದೆ ಎಂದು ನಿರಂಜನ್ ಹೇಳಿದರು.

ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ