ಹರೀಶ್‌ ಪೂಂಜ ಬಂಧಿಸಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಸಂಸದ ನಳಿನ್‌ ಕುಮಾರ್‌

sampriya

ಬುಧವಾರ, 22 ಮೇ 2024 (18:40 IST)
Normal 0 false false false EN-IN X-NONE X-NONE
Photo Credit Facebook

ಬೆಳ್ತಂಗಡಿ: ನೋಟಿಸ್‌ಗೆ ಪ್ರತಿಕ್ರಿಯಿಸಲು ಕಾಲವಕಾಶ ಕೇಳಿದ ಶಾಸಕ ಹರೀಶ್‌ ಪೂಂಜ  ಅವರನ್ನು ಬಂಧಿಸಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ್‌ ಹೊರಹಾಕಿದರು.

ಶಾಸಕಹರೀಶ್‌ ಪೂಂಜಾ ಅವರನ್ನು ಭೇಟಿಯಾದ ನಂತರ ಮಾತನಾಡಿದ ಕಟೀಲ್‌ ಅವರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾನೂನಿಗೆ ಗೌರವ ಕೊಟ್ಟು ಪೊಲೀಸರು ಕೊಟ್ಟ ನೋಟೀಸನ್ನು ತೆಗೆದುಕೊಂಡಿದ್ದು ಅದಕ್ಕೆ ಐದು ದಿನಗಳ ಕಾಲವಕಾಶವನ್ನು ಕೇಳಿ ಉತ್ತರವನ್ನು ಕೊಟ್ಟಿದ್ದಾರೆ. ಇದನ್ನು ಮೀರಿ ಪೊಲೀಸರು ಅವರನ್ನು ಬಂಧಿಸಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಕಾನೂನಿಗೆ ಗೌರವ ಕೊಟ್ಟು ಪ್ರಕ್ರಿಯೆಯನ್ನು ಪೊಲೀಸರು ಮಾಡಬೇಕು, ಐದು ದಿನ ಕಾಲವಕಾಶವನ್ನು ಕೇಳಿದ್ದಾರೆ. ಶಾಸಕರ ಮೇಲೆ ಪೊಲೀಸರು ಒತ್ತಡ ಹಾಕಿ ಬಂಧಿಸಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ