ಕುರುಬ ಸಮುದಾಯಕ್ಕೆ ಮಾತ್ರ ಎಸ್ ಟಿ ಸ್ಥಾನಮಾನ: ಸಿದ್ದರಾಮಯ್ಯ ಮೇಲೆ ನಾಯಕ ಸಮುದಾಯ ಮುನಿಸು
ನಮ್ಮ ಸಮುದಾಯವನ್ನು ಸಿಎಂ ಕಡೆಗಣಿಸಿದ್ದಾರೆ. ಕುರುಬ ಸಮುದಾಯವನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸಿದರೆ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹೀಗೇ ಮುಂದುವರಿದರೆ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನಾಯಕ ಸಮುದಾಯ ಎಚ್ಚರಿಕೆಯನ್ನೂ ನೀಡಿದೆ.