ನಿಮ್ಮ ತಾಯಿ ಸಾವಿನ ತನಿಖೆಯೂ ಆಗ್ಲಿ: ಬಿವೈ ವಿಜಯೇಂದ್ರಗೆ ಸಲಹೆ

Krishnaveni K

ಸೋಮವಾರ, 21 ಅಕ್ಟೋಬರ್ 2024 (16:23 IST)
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪತ್ನಿ ಸಾವಿಗೆ ಶೋಭಾ ಕರಂದ್ಲಾಜೆ ಕಾರಣ ಎಂದಿದ್ದ ಸಚಿವ ಭೈರತಿ ಸುರೇಶ್ ವಿರುದ್ಧ ಬಿಎಸ್ ವೈ ಪುತ್ರ ಬಿವೈ  ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ವಿಜಯೇಂದ್ರಗೆ ನೆಟ್ಟಿಗರು ನಿಮ್ಮ ತಾಯಿಯ ಸಾವಿನ ತನಿಖೆಯಾಗಲಿ ಎಂದು ಸಲಹೆ ನೀಡಿದ್ದಾರೆ.

ಶೋಭಾ ಕರಂದ್ಲಾಜೆ ವಿರುದ್ಧ ಭೈರತಿ ಸುರೇಶ್ ನಡೆಸಿರುವ ಗಂಭೀರ ಆರೋಪಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಬಿಜೆಪಿ ಘಟಕ ಮತ್ತು ಬಿವೈ ವಿಜಯೇಂದ್ರ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಭೈರತಿ ಸುರೇಶ್ ಒಬ್ಬ ದರೋಡೆಕೋರ ಎಂದು ಶೋಭಾ ಆರೋಪಿಸಿದ್ದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಭೈರತಿ ಸುರೇಶ್ ಕಾರಣ ಎಂದಿದ್ದರು.

ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಭೈರತಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ಸಭ್ಯತೆ ಮೀರಿ ಮಾತನಾಡಬಾರದು ಎಂದು ಸುದೀರ್ಘವಾಗಿ ಟ್ವೀಟ್ ಮಾಡಿ ಭೈರತಿ  ಸುರೇಶ್ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಿಮ್ಮ ತಾಯಿಯ ಸಾವಿನ ತನಿಖೆಯೂ ಆಗಲಿ ಬಿಡಿ. ಅದಕ್ಕಾದರೂ ಭೈರತಿ ಸುರೇಶ್ ಗೆ ಬೆಂಬಲ ಕೊಡಿ. ನಾವೂ ಇಂತಹದ್ದೊಂದು ಮಾತನ್ನು ಬಹಳ ಸಮಯದಿಂದ ಕೇಳುತ್ತಲೇ ಇದ್ದೇವೆ. ಹೀಗಾಗಿ ಎಲ್ಲವೂ ತನಿಖೆಯಾಗಲಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ