ಅಪಘಾತದಲ್ಲಿ ಎಣ್ಣೆಗಾಗಿ ಮುಗಿಬಿದ್ದ ಜನರು

ಭಾನುವಾರ, 16 ಸೆಪ್ಟಂಬರ್ 2018 (20:01 IST)
ಎಣ್ಣೆ ತುಂಬಿದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ, ಅಪಘಾತದಲ್ಲಿ ಲಾರಿ ಚಾಲಕನನ್ನ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಮುಂದಾಗದ ಜನ  ಮಾನವೀಯತೆ ಮರೆತು ಕ್ಯಾಂಟರ್ ನಲ್ಲಿ ಸೋರುತ್ತಿದ್ದ ಎಣ್ಣೆಗಾಗಿ ಮುಗಿಬಿದ್ದ ಘಟನೆ ನಡೆದಿದೆ.

ಲಾರಿ ಚಾಲಕನ ಸಾವಿಗೆ ಕಾರಣವಾದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ. ಇಳಕಲ್ ನಗರದ ಮುದಗಲ್ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಡುಗೆ ಎಣ್ಣೆ ತುಂಬಿದ ಕ್ಯಾಂಟರ್ ವಾಹನ ಇಳಕಲ್ ನಿಂದ ಹುನಗುಂದ ಮಾರ್ಗವಾಗಿ ಬರುತ್ತಿರುವಾಗ ಕ್ಯಾಂಟರ್ ವಾಹನಕ್ಕೆ  ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಈ ಅಫಘಾತದಲ್ಲಿ ಲಾರಿಯಲ್ಲಿ ಚಾಲಕ ಸಿಲುಕಿ ಹಾಕಿಕೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ. ಆದರೆ ಚಾಲಕನನ್ನ ರಕ್ಷಿಸಲು‌ ಮುಂದಾಗದ ಜನ್ರು, ಮಾನವೀಯತೆ ಮರೆತು, ಕೊಡ, ಕ್ಯಾನ್, ಬಕೇಟ್ ನೊಂದಿಗೆ ಬಂದು, ಸೋರುತ್ತಿದ್ದ ಅಡುಗೆ ಎಣ್ಣೆ ತುಂಬಿಸಿಕೊಳ್ಳಲು ಮುಗಿಬಿದ್ದರು. 

ಅಡುಗೆ ಎಣ್ಣೆಗಾಗಿ ‌ಮುಗಿಬಿದ್ದ ಜನರನ್ನು ಚದುರಿಸಿ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು. ಆದ್ರೆ ಆಸ್ಪತ್ರೆ ಮುಟ್ಟುವಷ್ಟರಲ್ಲಿ ಲಾರಿ ಚಾಲಕನ ಪ್ರಣಾಪಕ್ಷಿ ಹಾರಿಹೋಗಿದೆ‌. ಈ ಕುರಿತು ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ