ಪರಿಶೀಲನೆ ನಂತರ ಫೋನ್ ಟ್ಯಾಪಿಂಗ್ ಎಲ್ಲವೂ ತಿಳಿಯಲಿದೆ: ಪರಮೇಶ್ವರ್
ಚಿಕ್ಕಮಗಳೂರು : ಫೋನ್ ಕದ್ದಾಲಿಕೆ ವಿಚಾರವನ್ನು ಸಚಿವ ಎಂ.ಬಿ.ಪಾಟೀಲ್ ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಕೆಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಸಿಬಿಐ, ಐಟಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ನಾವು ಅನೇಕ ಬಾರಿ ಆರೋಪಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಚಲನವಲನಗಳನ್ನು ನೋಡಲಾಗುತ್ತಿದೆ ಎಂದು ಕಾಣುತ್ತೆ. ಅದಕ್ಕಾಗಿ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಪರಿಶೀಲನೆ ನಂತರ ಎಲ್ಲವೂ ತಿಳಿಯಲಿದೆ ಎಂದರು.