ಎಂಟಿಬಿ ನಾಗರಾಜ್ ಗೆ ಮಾನ ಮಾರ್ಯಾದೆ, ನಾಚಿಕೆ ಅನ್ನೋದೆ ಇಲ್ಲ !

ಸೋಮವಾರ, 11 ನವೆಂಬರ್ 2019 (11:10 IST)
ಹೊಸಕೋಟೆ : ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಮಾನ ಮಾರ್ಯಾದೆ, ನಾಚಿಕೆ ಅನ್ನೋದೆ ಇಲ್ಲ ಎಂದು ಅವರ ಸಹೋದರ ಪಿಳ್ಳಣ್ಣ ವಾಗ್ದಾಳಿ ನಡೆಸಿದ್ದಾರೆ.



ಎಂಟಿಬಿ ನಾಗರಾಜ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ ತನ್ನ ಎದೆಯಲ್ಲಿದ್ದಾರೆ ಅಂತಿದ್ದ, ಬಳಿಕ ಜನರನ್ನು ಎದೆಯಲ್ಲಿಟ್ಟುಕೊಂಡಿದ್ದೇನೆ ಅಂತಿದ್ದ. ಈಗ ಬಿಎಸ್ ವೈಯನ್ನು ತನ್ನ ಎದೆಯಲ್ಲಿಟ್ಟುಕೊಂಡಿದ್ದೇನೆ ಅಂತಾನೆ. ಎಂಟಿಬಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

 

ಅವನ ಜೊತೆ ಹುಷಾರಾಗಿರು ಎಂದು ನಮ್ಮ ತಂದೆ ಹೇಳಿದ್ರು. ಎಂಟಿಬಿ ನಿನ್ನನ್ನೇ ಸಂಬಳಕ್ಕೆ ಇಟ್ಟುಕೊಳ್ತಾನೆ ಎಂದು ಹೇಳಿದ್ರು, ಕುರಿ ಕಡಿಯುವವರು ಒಂದು ಕ್ಷಣ ಯೋಚಿಸಿ ಕಡೀತಾರೆ. ಆದರೆ ಇವನು ಯೋಚನೆ ಮಾಡದೆ ಕಡಿತಾನೆ. ಅವನು ಕಟುಕ, ತಂತ್ರಿ, ಚಂಡಾಲ. ಇವನಿಗಾಗಿ ಏಟು ತಿಂದು ಹೋರಾಟ ಮಾಡಿ ಗೆಲ್ಲಿಸಿದ್ವಿ. ಅನ್ನ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ ಎಂದು ಅವರು ಸಹೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ