ಸ್ವಾಭಿಮಾನಿಗಳು ಜೆಡಿಎಸ್ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ : ಸುಮಲತಾ

ಮಂಗಳವಾರ, 25 ಏಪ್ರಿಲ್ 2023 (17:43 IST)
ಮಂಡ್ಯ : ಎಂ ಶ್ರೀನಿವಾಸ್ ಅವರಂತಹ ಹಿರಿಯ ನಾಯಕರನ್ನು ಜೆಡಿಎಸ್ ಸರಿಯಾಗಿ ನಡೆಸಿಕೊಂಡಿಲ್ಲ. 3 ಬಾರಿ ಎಂಎಲ್ಎ ಆಗಿದ್ದವರಿಗೆ ಜೆಡಿಎಸ್ ಅವಮಾನ ಮಾಡಿದೆ. ಸ್ವಾಭಿಮಾನ ಇರುವವರು ಯಾರು ಕೂಡಾ ಜೆಡಿಎಸ್ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.
 
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಕೆಆರ್ ಪೇಟೆ ಕ್ಷೇತ್ರದಲ್ಲಿ 100% ಬಿಜೆಪಿಗೆ ಇದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯೇ ಎಂಬುದು ಕಾಣಿಸುತ್ತಿದೆ.

ಮಂಡ್ಯದಲ್ಲಿ ಬಿಜೆಪಿ ಇಲ್ಲ ಎನ್ನುವ ಕಾಂಗ್ರೆಸ್, ಜೆಡಿಎಸ್ನವರು ಫಲಿತಾಂಶ ಬಂದ ಮೇಲೆ ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ