ಕರಾವಳಿಯಲ್ಲಿ ಇಂದಿನಿಂದ ರಾಹುಲ್ ಗಾಂಧಿ ಪ್ರವಾಸಕ್ಕೆ ಅಪಸ್ವರ!

ಮಂಗಳವಾರ, 20 ಮಾರ್ಚ್ 2018 (10:15 IST)
ಮಂಗಳೂರು: ಇಂದಿನಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಪ್ರವಾಸ ಮಾಡಲಿದ್ದಾರೆ.
 

ಮಂಗಳೂರು, ಸುರತ್ಕಲ್ ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರು ಮತ್ತು ಸುರತ್ಕಲ್ ನಲ್ಲಿ ರಾಹುಲ್ ರೋಡ್ ಶೋ ಮಾಡಲಿದ್ದಾರೆ.

ನೆಹರೂ ಮೈದಾದನಲ್ಲಿ ಬೃಹತ್ ಸಾರ್ವಜನಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಸುರತ್ಕಲ್ ನಲ್ಲಿ ಜಂಕ್ಷನ್ ನಲ್ಲಿ ರಾಹುಲ್ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು, ಇದರ ವಿರುದ್ಧ ಬಿಜೆಪಿ ಅಪಸ್ವರವೆತ್ತಿದೆ. ಇದುವರೆಗೆ ಯಾವುದೇ ರೀತಿಯ ಹಿಂದೂ ಪರ ಕಾರ್ಯಕ್ರಮಗಳು, ಬೇರೆ ಪಕ್ಷದ ಕಾರ್ಯಕ್ರಮಗಳಿಗೆ ಇಲ್ಲಿ ಇದುವರೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಇದೀಗ ರಾಹುಲ್ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿರುವುದಕ್ಕೆ ಸ್ಥಳೀಯ ಪೊಲೀಸರ ಮೇಲೆ ಬಿಜೆಪಿ ಗರಂ ಆಗಿದೆ.

ಇದೇ ವೇಳೆ ರಾಹುಲ್ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲಿರುವ ರಾಹುಲ್ ಸರ್ವಧರ್ಮ ಸಮನ್ವಯತೆಯ ಮಂತ್ರ ಜಪಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ