ಮಳೆಯಿಂದ ಜಾಗರಣೆ ಮಾಡಿದ ಬಾಣಂತಿಯರು

ಗುರುವಾರ, 18 ಅಕ್ಟೋಬರ್ 2018 (15:51 IST)
ಭಾರಿ ಮಳೆ ಸುರಿದ ಕಾರಣದಿಂದ ಮಳೆ ನೀರಿನಿಂದಾಗಿ ಬಾಣಂತಿಯರು ಜಾಗರಣೆ ಮಾಡಿದ ಘಟನೆ ನಡೆದಿದೆ.

ದಾವಣಗೆರೆಯಲ್ಲಿ ಮಳೆ ಅವಾಂತಾರ ಮುಂದುವರಿದಿದೆ. ರಾತ್ರಿಯಲ್ಲಾ ಜಾಗರಣೆ ಮಾಡಿದ ಗರ್ಭಿಣಿ, ಬಾಣಂತಿಯರು ಪರದಾಡಿದರು.

ಮಳೆಯಿಂದಾಗಿ ಹೆರಿಗೆ ಆಸ್ಪತ್ರೆಯೊಳಗೆ ಮಳೆ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದೆ. ನೀರು ನುಗ್ಗಿದರೂ ಕೇರ್ ಮಾಡದ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ವಿರುದ್ಧ ರೋಗಿಗಳು ಹಾಗೂ ಸಂಬಂಧಿಕರು ಹಿಡಿಶಾಪ ಹಾಕಿದರು.

ಆಜಾದ್ ನಗರದಲ್ಲಿಯು ಮಳೆಯ ಅವಾಂತರ ಮುಂದುವರಿದಿದೆ. ಎಡಬಿಡದೆ ಸುರಿದ ಮಳೆಗೆ ಮನೆಗಳು ಕುಸಿದಿವೆ. ಹೀಗಾಗಿ ಬಡ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.  ದಾವಣಗೆರೆಯ ರಾತ್ರಿ ಮಳೆಗೆ ಜನತೆ ಅಲ್ಲೋಲ ಕಲ್ಲೋಲವಾಗಿದ್ದು, ಭಯಭೀತಿಗೊಂಡಿದ್ದಾರೆ. ಸಾಕಷ್ಟು ಹಾನಿ ಮಳೆಯಿಂದ ಸಂಭವಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ