ಬೆಳಿಗ್ಗೆ ಪೂಜೆ ಮಾಡುತ್ತಿದ್ದ ರಾಮ ರಾತ್ರಿ ಹುಡುಗಿಯರ ಜತೆ ಹೆಂಡ ಕುಡಿಯುತ್ತಿದ್ದ: ಮತ್ತೇ ವಿವಾದದ ಕಿಡಿ ಹೊತ್ತಿಸಿದ ಭಗವಾನ್

sampriya

ಸೋಮವಾರ, 10 ಜೂನ್ 2024 (17:54 IST)
Photo By X
ದಾವಣಗೆರೆ: ಶ್ರೀರಾಮ ತಂದೆಗೆ ಹುಟ್ಟಿಲ್ಲ, ಆತ ದಶರಥನ ಮಗನೇ ಅಲ್ಲ ಎಂದು ಭಾಷಣದಲ್ಲಿ ಹೇಳುವ ಮೂಲಕ ಸಾಹಿತಿ ಪ್ರೋ.ಕೆ.ಭಗವಾನ್ ಮತ್ತೇ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಇಲ್ಲಿಯ  ಹರಿಹರ  ತಾಲ್ಲೂಕಿನ ಹಣಗವಾಡಿ ಬಳಿ  ಇರುವ ಪ್ರೋ.ಕೃಷ್ಣಪ್ಪ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಶ್ರೀರಾಮ ತಂದೆಗೆ ಹುಟ್ಟಿಲ್ಲ. ಆತ ದಶರಥನ ಮಗನೇ ಅಲ್ಲ ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರೀರಾಮ ದಶರಥನಿಗೆ ಹುಟ್ಟೇ ಇಲ್ಲ, ಬದಲಾಗಿ ಪುರೋಹಿತರಿಗೆ ಹುಟ್ಟಿದವನು. ಇದು ವಾಲ್ಮೀಕಿ ರಾಮಾಯಣದಲ್ಲೇ ಇದೇ ಓದಿಕೊಳ್ಳಿ ಎಂದು ಹೇಳಿದ್ದಾರೆ.

ಮಹಾಭಾರತಕ್ಕೆ ಬಂದರೆ ಪಾಂಡವರು ತಂದೆಗೆ ಹುಟ್ಟಿದವರಲ್ಲ. ಬೇರೆ ಬೇರೆ ದೇವರಿಗೆ ಹುಟ್ಟಿದವರು. ರಾಮ ರಾಜ್ಯಭಾರ ಮಾಡೇ ಇಲ್ಲ. ರಾಮನ ತಮ್ಮ ಭರತ ರಾಜ್ಯಭಾರ ಮಾಡಿದ್ದ.

ಇನ್ನೂ ರಾಮ ಬೆಳಿಗ್ಗೆ ಪುರೋಹಿತರ ಜೊತೆ ಸೇರಿ ಪೂಜೆ ಮಾಡುತ್ತಿದ್ದ. ಮಧ್ಯಾಹ್ನ ಆದರೆ ಸಾಕು ಹುಡುಗಿಯರ ಜೊತೆ ಸೇರಿ ಹೆಂಡ ಕುಡಿಯುತ್ತಿದ್ದ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತೊಂದು ಹೆಡ್‌ಲೈನ್‌ ಒಕೆನಾ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ