ರಮೇಶ್ ಪರ ವಕೀಲರಿಂದ ಸಿಡಿ ಲೇಡಿ ವಿರುದ್ಧ ಆರೋಪ

ಸೋಮವಾರ, 5 ಏಪ್ರಿಲ್ 2021 (09:59 IST)
ಬೆಂಗಳೂರು: ಎಸ್ ಐಟಿ ತನಿಖಾಧಿಕಾರಿಗಳು ರಾಜಕೀಯ ಪ್ರಭಾವಕ್ಕೊಳಗಾಗಿದ್ದಾರೆ ಎಂಬ ಸಿಡಿ ಲೇಡಿಯ ಆರೋಪಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಪರ ವಕೀಲರು ತಿರುಗೇಟು ನೀಡಿದ್ದಾರೆ.


ಎಸ್ ಐಟಿ ಪರ ಯುವತಿ ಪರ ವಕೀಲರು ಒತ್ತಡ ಹೇರುವ ಯತ್ನ ನಡೆಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಆರೋಪಿಸಿದ್ದಾರೆ.

ಇಂದು ಯುವತಿ ಮತ್ತು ರಮೇಶ್ ಜಾರಕಿಹೊಳಿಗೆ ಎಸ್ ಐಟಿ ತಂಡ ತನಿಖೆಗೆ ಬರುವಂತೆ ಸೂಚನೆ ನೀಡಿತ್ತು. ಅದರ ಬೆನ್ನಲ್ಲೇ ಎರಡೂ ಪಾರ್ಟಿಗಳೂ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಎಸ್ ಐಟಿ ಮೇಲೆ ನಮ್ಮ ಕಕ್ಷಿದಾರರು ಅವರ ಪ್ರಭಾವ ಬೀರಿ ಒತ್ತಡ ಹೇರುತ್ತಿದ್ದಾರೆ ಎಂಬುದು ಸುಳ್ಳು ಆರೋಪ ಎಂದಿರುವ ರಮೇಶ್ ಪರ ವಕೀಲರು ಬದಲಾಗಿ ಯುವತಿ ಪರ ವಕೀಲರ ಮೇಲೆಯೇ ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ