ಶಿವಶಂಕರರೆಡ್ಡಿಗೆ ವಾರ್ನಿಂಗ್ ನೀಡಿದ ರವಿನಾರಾಯಣರೆಡ್ಡಿ

ಗುರುವಾರ, 7 ನವೆಂಬರ್ 2019 (10:55 IST)
ಬೆಂಗಳೂರು : ಗೌರಿಬಿದನೂರು ನಗರದ ಹೊರವಲಯದಲ್ಲಿರುವ ನದಿ ದಡದ  ಒತ್ತುವರಿ ತೆರವಿಗೆ ಮುಂದಾದ್ರೆ ಶಾಸಕರ ಕೈಗಳನ್ನು ಕತ್ತರಿಸುತ್ತೇನೆ ಎಂದು ಎನ್.ಎಚ್.ಶಿವಶಂಕರರೆಡ್ಡಿಗೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ರವಿನಾರಾಯಣರೆಡ್ಡಿ ವಾರ್ನಿಂಗ್ ನೀಡಿದ್ದಾರೆ.



ಗೌರಿಬಿದನೂರು  ನಗರಸಭೆ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರವಿನಾರಾಯಣರೆಡ್ಡಿ , ಗೌರಿಬಿದನೂರು ನಗರದ ಹೊರವಲಯದಲ್ಲಿರುವ ನದಿ ದಡದಲ್ಲಿ ಒತ್ತುವರಿ ಮಾಡಿಕೊಂಡು ಬಡವರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಒತ್ತುವರಿ ತೆರವಿಗೆ ಮುಂದಾದ್ರೆ ಶಾಸಕರ ಕೈಗಳನ್ನು ಕತ್ತರಿಸುತ್ತೇನೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

 

ಅಷ್ಟೇ ಅಲ್ಲದೇ ಈಗಾಗಲೇ ಶಿವಶಂಕರರೆಡ್ಡಿಯ ಒಂದು ಕೈ ಮುರಿದಿದ್ದೇನೆ. ನಾನು ಮನಸ್ಸು ಮಾಡಿದ್ರೆ ಅವರ ಎರಡು ಕೈಗಳನ್ನು ಕತ್ತರಿಸುತ್ತೇನೆ ಎಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ