ರೌಡಿಶೀಟರ್ ಸ್ಲಂ ಭರತ್ ಪೊಲೀಸರ ಗುಂಡಿಗೆ ಬಲಿ

ಗುರುವಾರ, 27 ಫೆಬ್ರವರಿ 2020 (13:37 IST)

ಭೂಗತ ಲೋಕದಲ್ಲಿ ಮೆರೆಯೋದಕ್ಕೆ ಅಂತ ಮಾಡಬಾರದ ಕೆಲಸ ಮಾಡಿ ಮೆರೆಯೋಕೆ ಹೊರಟಿದ್ದ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
 

ಬೆಂಗಳೂರಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ರೌಡಿಶೀಟರ್ ಸ್ಲಂ ಭರತ್ ನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ಗುಂಡು ನೇರವಾಗಿ ಭರತ್ ನ ಹೊಟ್ಟೆ ಹೊಕ್ಕಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಸೋಲದೇವನಹಳ್ಳಿ ಬಳಿ ಘಟನೆ ನಡೆದಿದ್ದು, ರಾಜಗೋಪಾಲ ನಗರ ಠಾಣೆಯ ಇನ್ಸಪೆಕ್ಟರ್ ಹಾರಿಸಿದ ಗುಂಡಿಗೆ ರೌಡಿ ಸಾವನ್ನಪ್ಪಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ