ದುರ್ಗಾ ಪೂಜೆ ಆಚರಣೆ ವೇಳೆ ದಾಂಧಲೇ ನಡೆಸಿದ್ದ ಏಳು ಜನರ ಬಂಧನ

ಶನಿವಾರ, 20 ಅಕ್ಟೋಬರ್ 2018 (16:23 IST)
ದುರ್ಗಾ ಪೂಜೆ ಆಚರಣೆ ಸಂದರ್ಭದಲ್ಲಿ ದಾಂಧಲೇ ನಡೆಸಿದ್ದ ಏಳು ಜನರ ಬಂಧನವಾಗಿದೆ.

ಬೆಂಗಳೂರಿನ ಕಾಡುಗೋಡಿ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದೆ. ಕಾಡುಗೋಡಿಯ ಚನ್ನಸಂದ್ರ ಬಳಿಯಿರುವ ಇಶಾ ಮಿಸ್ಟಿನ್ ಗ್ರೀನ್ ಅಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ನವರಾತ್ರಿಯ ದುರ್ಗಾ ಪೂಜೆ
 ರಾತ್ರಿ ಸಂಭ್ರಮಾಚರಣೆ ವೇಳೆ ಕೆಲ ಕಿಡಿಗೇಡಿಗಳು ಅಪಾರ್ಟ್ಮೆಂಟ್ ಅವರಣಕ್ಕೆ ನುಗ್ಗಿ ಹಲ್ಲೆ ನಡೆಸಿದ್ದರು.

ಕಿಡಿಗೇಡಿಗಳ ಕೃತ್ಯಕ್ಕೆ ಬೇಸತ್ತ ಅಪಾರ್ಟ್ ವಾಸಿಗಳಿಂದ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.
ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಅರೋಪಿಗಳ ಬಂಧನವಾಗಿದೆ.
ಮುನಿಸ್ವಾಮಿ, ಶ್ರೀನಿವಾಸ್ ಗೌಡ, ಓಂ ಪ್ರಕಾಶ್, ಅನಿಲ್, ವಿನೋದ್, ಶಶಿಕಲಾ ಹಾಗೂ ಹೇಮಾವತಿ ಬಂಧಿತ ಆರೋಪಿಗಳಾಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ