ಅಗಲಿದ ಗದಗ ಶ್ರೀಗಳಿಗೆ ಶಾಮನೂರು ಸಂತಾಪ

ಶನಿವಾರ, 20 ಅಕ್ಟೋಬರ್ 2018 (16:54 IST)
ಗದಗಿನ ತೋಂಟದಾರ್ಯ ಶ್ರೀಗಳು ನಿಧನ ಹಿನ್ನಲೆ ದಾವಣಗೆರೆಯಲ್ಲಿಂದು, ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸಂತಾಪ ಸೂಚಿಸಿದ್ದಾರೆ.

ತೋಂಟದಾರ್ಯ ಸ್ವಾಮಿಜಿ ತುಂಬಾ ಒಳ್ಳೆಯರು, ಅವರಿಂದು ವಿಧಿವಶರಾಗಿದ್ದಾರೆ. ಅವರಿನ್ನೂ ಬದುಕಿ ನಮಗೆ ಮಾರ್ಗದರ್ಶನ ಮಾಡಬೇಕಿತ್ತು, ಆದರೆ ಅಕಾಲಿಕ ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದಾವಣಗೆರೆಯಲ್ಲಿ ಶ್ರೀಗಳಿಗೆ ಶಾಮನೂರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯೇಕ ಧರ್ಮ ವಿಚಾರ

ಪ್ರತ್ಯೇಕ ಲಿಂಗಾಯಿತ ಧರ್ಮ ಶಿಫಾರಸು ವಿಚಾರವಾಗಿ ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ ವಿರುದ್ದ ಲಿಂಗಾಯಿತ ಕಂಪನಿಯವರು ಕೆಲವೆಡೆ ಚಪ್ಪಲಿ ಹಾಕಿ‌ ಪ್ರತಿಭಟನೆ ಮಾಡಿದ್ದಾರೆ. ಯಾರು ಯಾರದು ಎಲ್ಲಿ ಜಾಸ್ತಿ ಮೆಜಾರಿಟಿ ಇರುತ್ತೊ ಅಲ್ಲಿ ಅವರ ಬಲ‌ ತೋರಿಸಿ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಶಾಮನೂರು ವ್ಯಂಗ್ಯವಾಗಿ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ