ಸಿದ್ದಗಂಗಾ ಶ್ರೀ ಶೀಘ್ರ ಚೇತರಿಕೆಗಾಗಿ ಪೂಜೆ

ಶುಕ್ರವಾರ, 18 ಜನವರಿ 2019 (17:24 IST)
ಸಿದ್ದಗಂಗಾ ಶ್ರೀಗಳು ಶೀಘ್ರ ಚೇತರಿಕೆ ಹೊಂದಲಿ ಎಂದು ವಿಧ್ಯಾರ್ಥಿಗಳಿಂದ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.

ನಡೆದಾಡುವ ದೇವರು ಬೇಗ ಗುಣಮುಖವಾಗಲಿ ಎಂದು ಬೀದರ್ ನ ಐತಿಹಾಸಿಕ ಪಾಪನಾಶ ಶಿವನ ದೇವನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

ಬೀದರ್ ನ ಹೊರವಲಯದಲ್ಲಿರುವ ಐತಿಹಾಸಿಕ ಶಿವನ ದೇವಸ್ಥಾನದಲ್ಲಿ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.

ಶ್ರೀಗಳು ಬೇಗ ಗುಣಮುಖರಾಗಲಿ ಹಾಗೂ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ವಿದ್ಯಾರ್ಥಿಗಳು ಆಗ್ರಹ ಮಾಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ