ರಮೇಶ್ ಜಾರಕಿಹೊಳಿ ಹಾನೆಸ್ಟ್ ಮ್ಯಾನ್ ಎಂದು ಹೊಗಳಿದ ಸಿದ್ಧರಾಮಯ್ಯ

ಶುಕ್ರವಾರ, 28 ಡಿಸೆಂಬರ್ 2018 (12:13 IST)
ಬಾದಾಮಿ : ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದ ಹಿನ್ನಲೆಯಲ್ಲಿ ರಮೇಶ್ ಜಾರಕಿಹೊಳಿ ಹಾನೆಸ್ಟ್ ಮ್ಯಾನ್. ಅವರು ಎಲ್ಲೂ ಹೋಗಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.


ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಬೇಸರಗೊಂಡ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗತ್ತಿಲ್ಲ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, ‘ರಮೇಶ್ ಜಾರಕಿಹೊಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ನಾನೇ ಮಾತನಾಡ್ತೀನಿ’ ಎಂದು ಹೇಳಿದ್ದಾರೆ.


‘ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲೇ ಇದ್ದಾರೆ. ರಮೇಶ್ ಜಾರಕಿಹೊಳಿ ಹಾನೆಸ್ಟ್ ಮ್ಯಾನ್, ಎಲ್ಲೂ ಹೋಗಲ್ಲ. ಸ್ವಲ್ಪ ಅಸಮಾಧಾನ ಇದೆ. ಎಲ್ಲವು ಸರಿ ಹೋಗುತ್ತೆ’ ಎಂದು ಜಾರಕಿಹೊಳಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ