ಶಿರಸಿಯ ಜಾತ್ರೆಯಲ್ಲಿ ಪೊಲೀಪನ್ನ ವಿಶೇಷ ಹರಕೆ

ಗುರುವಾರ, 17 ಮಾರ್ಚ್ 2022 (16:29 IST)
ಶಿರಸಿಯ ಮಾರಿಕಾಂಬ ಜಾತ್ರೆಯ ಕರ್ತವ್ಯಕ್ಕೆ ನಿಯೋಜಿಸಿಲ್ಪಟ್ಟಿದ್ದಂತ ಪೊಲೀಸ್ ಪೇದೆಯೊಬ್ಬರು, ಬಾಳೆ ಹಣ್ಣಿನ ಮೇಲೆ ಔರಾದ್ಕಾರ್ ವರದಿ ಬೇಗ ಜಾರಿಯಾಗಲಿ. ಪೊಲೀಸರ ವೇತನ ಹೆಚ್ಚಳ ಆಗಲಿ. ಅಲ್ಲದೇ ಪೊಲೀಸ್ ಇಲಾಖೆ ಹೆಚ್ಚಿನ ಶಕ್ತಿ ಕೊಡು ಎಂಬುದಾಗಿ ಬರೆದು, ರಥದ ಮೇಲೆ ತೂರಿದ್ದಾರೆ.
ಶಿರಸಿಯ ಮಾರಿಕಾಂಬ ಜಾತ್ರೆಯ ಸಂದರ್ಭದಲ್ಲಿ ರಥ ಹರಿಯ ವೇಳೆಯಲ್ಲಿ ಭಕ್ತರು ತಮ್ಮ ಇಷ್ಟವನ್ನು ಬಾಳೆಹಣ್ಣುಗಳ ಮೇಲೆ ಬರೆದು ತಾಯಿ ಮಾರಿಕಾಂಬೆ ತೀರಿಸುವಂತೆ ರಥದ ಮೇಲೆ ತೂರುತ್ತಾರೆ. ಅದೇ ರೀತಿಯಲ್ಲಿಯೇ ಪೊಲೀಸ್ ಪೇದೆಯೊಬ್ಬರು ವಿಶಿಷ್ಟ ರೀತಿಯಲ್ಲಿ ಹರಕೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಬೇಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ