ಧರ್ಮಸ್ಥಳ ಬುರುಡೆ ಚಿನ್ನಯ್ಯನನ್ನು ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು

Krishnaveni K

ಶನಿವಾರ, 30 ಆಗಸ್ಟ್ 2025 (12:06 IST)
ಬೆಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ ಚಿನ್ನಯ್ಯನನ್ನು ಪೊಲೀಸರು ಈಗ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಬೆಳ್ತಂಗಡಿ ಠಾಣೆಯಲ್ಲಿ ಚಿನ್ನಯ್ಯನನ್ನು ಇದುವರೆಗೆ ಇರಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಈ ವೇಳೆ ಎಸ್ಐಟಿ ಅಧಿಕಾರಿಗಳ ಮುಂದೆ ಚಿನ್ನಯ್ಯ ಸಾಕಷ್ಟು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಬುರುಡೆ ಗ್ಯಾಂಗ್ ನಿರ್ದೇಶನದ ಮೇರೆಗೇ ಈ ಕೆಲಸ ಮಾಡಿದ್ದಾಗಿ ಹೇಳಿದ್ದ.

ಅದರಂತೆ ತಾನು ಈ ಮೊದಲು ತಂದಿದ್ದ ಬುರುಡೆ ಎಲ್ಲಿಂದ ತಂದಿದ್ದು, ಯಾರು ಕೊಟ್ಟಿದ್ದು ಎಂದೂ ಹೇಳಿದ್ದ. ಈ ವೇಳೆ ಆತ ಬುರುಡೆಯನ್ನು ಬೆಂಗಳೂರಿಗೆ ತೆಗೆದುಕೊಂಡಿದ್ದಾಗಿ ಹೇಳಿದ್ದ. ಹೀಗಾಗಿ ಪೊಲೀಸರು ಈಗ ಬೆಂಗಳೂರಿಗೆ ಸ್ಥಳ ಮಹಜರು ನಡೆಸಲು ಆತನನ್ನು ಕರೆದುಕೊಂಡು ಬರುತ್ತಿದ್ದಾರೆ. ಈ ಮೊದಲು ಆತನನ್ನು ತಮಿಳುನಾಡು ಅಥವಾ ಮಂಡ್ಯಕ್ಕೆ ಕರೆದೊಯ್ದಿರಬಹುದು ಎನ್ನಲಾಗಿತ್ತು.

ಆತ ವಿಚಾರಣೆ ವೇಳೆ ಸಾಕಷ್ಟು ವಿಚಾರಗಳನ್ನು ಹೇಳಿದ್ದಾನೆ. ಬುರುಡೆ ಗ್ಯಾಂಗ್ ತನ್ನನ್ನು ಯಾವೆಲ್ಲಾ ಸ್ಥಳಗಳಿಗೆ ಕರೆದೊಯ್ದಿತ್ತು. ಬುರುಡೆ ಎಲ್ಲಿಂದ ತರಲಾಗಿತ್ತು ಎಂದು ಹೇಳಿದ್ದ. ಹೀಗಾಗಿ ಈಗ ಆ ಎಲ್ಲಾ ಸ್ಥಳಗಳಿಗೆ ತೆರಳಿ ಮಹಜರು ನಡೆಸುವ ಸಾಧ್ಯತೆಯಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ