ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕಚೇರಿಗೆ ಮಸಿ

geetha

ಗುರುವಾರ, 8 ಫೆಬ್ರವರಿ 2024 (15:42 IST)
ಬೆಂಗಳೂರು-ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಸಚಿವೆ ನಿರ್ಮಲ‌ ಸೀತಾರಾಮನ್ ಕಛೇರಿಗೆ ಮಸಿ ಬಳಿದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.ರಾಜ್ಯಕ್ಕೆ ತೆರಿಗೆ ಅನ್ಯಾಯ ಖಂಡಿಸಿ ನಿರ್ಮಲಾ ಸೀತಾರಾಮನ್ ನಾಮಪಲಕಕ್ಕೆ NSUI ಕಾರ್ಯಕರ್ತರು ಮಸಿ ಬಳಿದಿದ್ದಾರೆ.
 
 ಮಸಿ ಬಳಿದ ಹಿನ್ನೆಲೆಯಲ್ಲಿ NSUI ಕಾರ್ಯಕರ್ತರನ್ನ ವಿಧಾನಸೌಧ ಪೊಲೀಸರಿಂದ  ವಶಕ್ಕೆ ಪಡೆದಿದ್ದಾರೆ.ಸೂರಜ್, ಲಕ್ಷ್ಯ ರಾಜ್, ನಿಶ್ಚಯ್ ಗೌಡ, ನರೇಶ್, ಕಾರ್ತಿಕ್ ನನ್ನ  ಪೊಲೀಸರು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ  ಪೊಲೀಸರು ಕರೆದೊಯ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ