ಎಕ್ಸಾಂ ವೇಳೆ ಉತ್ತರ ಪತ್ರಿಕೆ ತೋರಿಸಲಿಲ್ಲವೆಂದ ಸಹಪಾಠಿ ಮೇಲೆ ವಿದ್ಯಾರ್ಥಿ ಎಸಗಿದ್ದಾನೆ ಇಂತಹ ಘೋರ ಕೃತ್ಯ

ಗುರುವಾರ, 24 ಜನವರಿ 2019 (06:55 IST)
ಬೆಂಗಳೂರು : ಎಕ್ಸಾಂ ಹಾಲ್ ನಲ್ಲಿ ಉತ್ತರ ಪತ್ರಿಕೆ ತೋರಿಸಲಿಲ್ಲವೆಂದು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದ ಘಟನೆ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮೇರಿಯಾ ಸದನ ಶಾಲೆಯಲ್ಲಿ ನಡೆದಿದೆ.


ಗೌತಮ್ ಗಾಯಗೊಂಡ ವಿದ್ಯಾರ್ಥಿಯಾಗಿದ್ದು, ರಕ್ಷಿತ್ ಆರೋಪಿ ವಿದ್ಯಾರ್ಥಿ. ಮೇರಿಯಾ ಸದನ ಶಾಲೆಯಲ್ಲಿ ಸಮಾಜಶಾಸ್ತ್ರ ವಿಷಯದ ಕುರಿತು ಎಸ್​.ಎಸ್.​ಎಲ್.​ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿತ್ತು. ಸುಮಾರು 48 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ರಕ್ಷಿತ್ ಎಂಬ ವಿದ್ಯಾರ್ಥಿ ಗೌತಮ್ ಎಂಬ ವಿದ್ಯಾರ್ಥಿ ಬಳಿ ಉತ್ತರ ಪತ್ರಿಕೆಯನ್ನು ತೋರಿಸಲು ಹೇಳಿದ್ದಾನೆ. ಆಗ ಗೌತಮ್ ಬರೆಯುವುದು ಇನ್ನೂ ಇದೆ, ಸದ್ಯಕ್ಕೆ ಆಗಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ರಕ್ಷಿತ್ ಗೌತಮ್​ ಗೆ ಚಾಕುವಿನಿಂದ ಇರಿದಿದ್ದಾನೆ.


ತಕ್ಷಣ ಗೌತಮ್​ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕಾಮಕ್ಷಿಪಾಳ್ಯ ಪೊಲೀಸರು  ಆರೋಪಿ ಬಾಲಕನನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ