ಕೊರೋನಾ ಪರಿಹಾರಕ್ಕೆ ಸಂಸದೆ ಸುಮಲತಾ ಅಂಬರೀಶ್ ಭರಪೂರ ಕೊಡುಗೆ

ಶುಕ್ರವಾರ, 27 ಮಾರ್ಚ್ 2020 (09:47 IST)
ಮಂಡ್ಯ: ಕೊರೋನಾವೈರಸ್ ಹರಡುವಿಕೆ ತಡೆಗೆ ತಮ್ಮ ಸ್ವಕ್ಷೇತ್ರ ಮಂಡ್ಯ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಸದೆ ಸುಮಲತಾ ಅಂಬರೀಶ್ ಭರ್ಜರಿ ದೇಣಿಗೆ ನೀಡಿದ್ದಾರೆ.


ಮಂಡ್ಯದಲ್ಲಿ ಮಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಬಾಧಿತರ ನೆರವಿಗೆ ವೆಂಟಿಲೇಟರ್ ಇತ್ಯಾದಿ ಅಗತ್ಯ ಸೌಲಭ‍್ಯ ಒದಗಿಸಲು ಸಂಸದರ ನಿಧಿಯಿಂದ 50 ಲಕ್ಷ ರೂ. ಪರಿಹಾರ ಕೊಡಿಸಲು ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಅದಲ್ಲದೆ, ತಮ್ಮ ಎರಡು ತಿಂಗಳ ವೇತನವನ್ನು ತಲಾ 2 ಲಕ್ಷ ರೂ.ಗಳಂತೆ ಮಂಡ್ಯ ಕ್ಷೇತ್ರಕ್ಕೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಲು ತೀರ್ಮಾನಿಸಿರುವುದಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ