ಸುಪ್ರೀಂಕೋರ್ಟ್ ಮಹಾ ತೀರ್ಪು: ಕೋರ್ಟ್ ಹೇಳಿದ ಎರಡು ಖಡಕ್ ವಿಚಾರಗಳು!
ಆದರೆ ಸ್ಪೀಕರ್ ಗೆ ಇಂತಿಷ್ಟೇ ಕಾಲಮಿತಿ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿಲ್ಲ. ಸ್ಪೀಕರ್ ನಿರ್ಧಾರದವರೆಗೂ ಶಾಸಕರನ್ನು ಅಧಿವೇಶನದಲ್ಲಿ ಭಾಗವಹಿಸಲು ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಇದೀಗ ರೆಬಲ್ ಶಾಸಕರು ವಿಪ್ ನ ಒತ್ತಡದಿಂದ ಹೊರಬಿದ್ದಿದ್ದಾರೆ. ಆದರೆ ಅನರ್ಹತೆ ನಿರ್ಧಾರ ಕೈಗೊಳ್ಳುವುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ ಎಂದಿರುವ ಸುಪ್ರೀಂ ಕೋರ್ಟ್ ಸ್ಪೀಕರ್ ಗೆ ನಿರ್ದಿಷ್ಟ ಆದೇಶ ನೀಡಿಲ್ಲ.
ಹೀಗೆ ಎರಡು ಮುಖ್ಯ ವಿಚಾರಗಳನ್ನು ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಸುಪ್ರೀಂಕೋರ್ಟ್ ವಿನಾಕಾರಣ ವಿಳಂಬ ಧೋರಣೆ ಮಾಡುತ್ತಿರುವುದರ ವಿರುದ್ಧ ಆದೇಶ ನೀಡಿದೆ ಎನ್ನಬಹುದು.