ಮೈಸೂರು ವಿವಿಯಲ್ಲಿ ನಡೆದ ಘಟನೆಯ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ಮೈಸೂರು ವಿವಿ ಕುಲಪತಿ

ಶುಕ್ರವಾರ, 10 ಜನವರಿ 2020 (10:48 IST)
ಬೆಂಗಳೂರು : ಧರಣಿ ವೇಳೆ ‘ಫ್ರೀ ಕಾಶ್ಮೀರ’ ಪ್ಲೇಕಾರ್ಡ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದ ವರದಿಯನ್ನು ಮೈಸೂರು ವಿವಿ ಕುಲಪತಿ ರಾಜ್ಯಪಾಲರಿಗೆ ನೀಡಿದ್ದಾರೆ.


ಮೈಸೂರು ವಿವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮೈಸೂರು ವಿವಿಯಲ್ಲಿ ಪ್ರತಿಭಟನೆ ಆಯೋಜನೆಯ ಉದ್ದೇಶ, ಆಯೋಜಿತ ಸಂಘಟನೆಗಳ ವಿವರ, ವಿದ್ಯಾರ್ಥಿಗಳ ಮಾಹಿತಿ, ಮೈಸೂರು ವಿವಿಯಿಂದ ನೀಡಿರುವ ನೋಟಿಸ್ ಪ್ರತಿ ಸೇರಿ ಎಲ್ಲ ಮಾಹಿತಿಯನ್ನು ಮೈಸೂರು ವಿವಿ ಕುಲಪತಿ ಆರ್.ಶಿವಪ್ಪ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

 

ಇದೇ ವರದಿ ಸರ್ಕಾರದ ಗಮನಕ್ಕೂ ತಂದಿರುವ ಶಿವಪ್ಪ ಇದೀಗ ಇಮೇಲ್ ಮೂಲಕ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ