ಅಮವಾಸ್ಯೆ ದಿನ ಹೂತಿದ್ದ ಶವ ಹೊತ್ತೊಯ್ದರು

ಬುಧವಾರ, 22 ಜುಲೈ 2020 (19:02 IST)
ಅಮಾವಾಸ್ಯೆ ದಿನದಂದು ಹೂತಿದ್ದ ಶವವನ್ನು ಹೊತ್ತೊಯ್ಯಲಾಗಿದೆ.

ವಾಮಾಚಾರ, ನಿಧಿ ಆಸೆಗೆಂದು ಹೂತಿದ್ದ ಶವ ಹೊತ್ತೊಯ್ದಿರು ಶಂಕೆ ವ್ಯಕ್ತವಾಗಿದೆ.

ಬಾಗಲಕೋಟೆ ಜಿಲ್ಲೆಯ ರೂಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಭೀಮನ ಅಮಾವಾಸ್ಯೆಯಂದು ಹೂತಿದ್ದ ಶವ ಹೊತ್ತೊಯ್ದಿದ್ದಾರೆ ದುಷ್ಕರ್ಮಿಗಳು.

ರೂಗಿ ಗ್ರಾಮದ 63 ವರ್ಷದ ರಾಮಪ್ಪ ಫೆಬ್ರವರಿ 21 ರಂದು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದನು. ಶಿವರಾತ್ರಿ ಅಮಾವಾಸ್ಯೆಯಂದು ಸಾವನ್ನಪ್ಪಿದ್ದನು.

ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಿದ್ದರು ಕುಟುಂಬಸ್ಥರು. ಜುಲೈ 21ರಂದು ಭೀಮನ ಅಮಾವಾಸ್ಯೆಯಂದು ಹೂತಿದ್ದ ಶವ ಹೊತ್ತೊಯ್ಯಲಾಗಿದೆ.

ಶವ ಹೂತು ಬರೋಬ್ಬರಿ ಐದು ತಿಂಗಳ ಬಳಿಕ ಹೂತಿದ್ದ ಶವ ನಾಪತ್ತೆಯಾಗಿದೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ