ಶ್ರೀರಾಮನ ಕಟೌಟ್ ಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು

geetha

ಶನಿವಾರ, 20 ಜನವರಿ 2024 (16:20 IST)
ಬೆಂಗಳೂರು- ನಗರದ ಲೂಲು ಮಾಲ್ ಸಮೀಪದ ಸುಜಾತ ಟಾಕೀಸ್ ಬಳಿ  ಶ್ರೀರಾಮನ ಕಟೌಟ್ ಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ.ನಿನ್ನೆ ರಾತ್ರಿ ಶ್ರೀರಾಮನ ಕಟೌಟ್  ಬಿಜೆಪಿ ಕಾರ್ಯಕರ್ತರು ಅಳವಡಿಸಿದ್ದರು.ಇವತ್ತು ಬೆಳಗಿನ ಜಾವ  ಶ್ರೀ ರಾಮನ  ಕಟೌಟ್ ಹರಿದು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. 
 
ಗಾಂಧಿನಗರ ವಿಧಾನಸಭಾ ಕ್ಷೇತ್ರ, ಓಕಳಿಪುರಂ ವಾರ್ಡ್ ನಲ್ಲಿ ಶ್ರೀರಾಮನ ಕಟೌಟ್ ಅಳವಡಿಸಲಾಗಿತ್ತು.ಸ್ಥಳದಲ್ಲಿ ಜನರ ಜಮಾವಣೆ ಆಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದು,ಸದ್ಯ ಅರ್ಧ ಹರಿದಿರೋ ಶ್ರೀರಾಮನ ಕಟೌಟ್ ತೆರವು ಮಾಡಿದ್ದಾರೆ.ಸ್ಥಳದಿಂದ ಜನರನ್ನ ಪೊಲೀಸರು ಕಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ