ಕೇವಲ 500 ರೂ. ಗಾಗಿ ವ್ಯಕ್ತಿಯ ಜೀವ ತೆಗೆದ ಪಾತಕರು

ಶನಿವಾರ, 13 ಅಕ್ಟೋಬರ್ 2018 (06:44 IST)
ಚಂಡೀಗಢ : ಕೇವಲ 500 ರೂಪಾಯಿಗಾಗಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಜೀವ ತೆಗೆದ ಘಟನೆ ಹರಿಯಾಣದ ಪಲ್ವಾಲ್ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ.


ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಬಂಕ್‍ನ ಸೇಲ್ಸ್‌ಮೆನ್‌ ಮೇಲೆ ಗುಂಡು ಹಾರಿಸಿ ಆತನ ಬಳಿ ಇದ್ದ 500 ರೂ. ಹಣವನ್ನು ಪಡೆದು ಮತ್ತೆ ಗುಂಡು ಹಾರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಗುಂಡು ತಗುಲಿ ನರಳುತ್ತಿದ್ದ ವ್ತಕ್ತಿಯನ್ನು ಅಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.


ಸೋಮವಾರ ರಾತ್ರಿ 9 ರ ವೇಳೆಗೆ ನಡೆದ ಈ ಘಟನೆ ಪೆಟ್ರೋಲ್ ಬಂಕ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಶರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ