ಆಂಧ್ರ, ತೆಲಂಗಾಣದಿಂದ ರಾಜ್ಯದ ಈ ಜಿಲ್ಲೆಗೆ ಪ್ರವೇಶವಿಲ್ಲ

ಮಂಗಳವಾರ, 7 ಜುಲೈ 2020 (15:24 IST)
ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಈ ಜಿಲ್ಲೆಗೆ ಬರುವವರಿಗೆ ಪಾಸ್ ಕಡ್ಡಾಯ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲದೇ ಹೆಚ್ಚಿನ ಪ್ರಕರಣಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ವಿಮ್ಸ ಆಸ್ಪತ್ರೆಗೆ ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

ಇ-ಪಾಸ್ ಸೇವಾ ಸಿಂಧುವಿನಲ್ಲಿ ನೋಂದಣಿ ಮತ್ತು ಜಿಲ್ಲಾಡಳಿತ ನೀಡುವ ಪಾಸ್ ಗಳಿಲ್ಲದೇ  ಬಳ್ಳಾರಿ ಜಿಲ್ಲೆಗೆ ಪ್ರವೇಶ ನೀಡುವುದಿಲ್ಲ.  ಈ ಆದೇಶ ಸರಕು ಸಾಗಾಣೆ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ.

ಆಂಧ್ರಪ್ರದೇಶದಿಂದ ಬರುವ ಬಸ್ ಗಳಲ್ಲಿ ಸೇವಾ ಸಿಂಧು ನೋಂದಣಿ ಮಾಡಿರುವವರನ್ನು ಮಾತ್ರ ಕರೆತರಲು ಸೂಚಿಸಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ