ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ರೈತರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದ ಕೇಂದ್ರ ಸಚಿವ

ಮಂಗಳವಾರ, 8 ಡಿಸೆಂಬರ್ 2020 (12:19 IST)
ಬೆಂಗಳೂರು : ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂದ್ ವಿಚಾರ ಕೇಂದ್ರ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ತಪ್ಪು ದಾರಿಗೆಳೆಯುತ್ತಿದೆ. ಬಹಳಷ್ಟು ಸರ್ಕಾರಗಳು ಎಪಿಎಂಸಿ ಸುಧಾರಣೆ ಮಾಡಿದೆ. ದೇಶಕ್ಕೆ ಅನ್ವಯ ಆಗುವಂತೆ ಮೋದಿ ಸರ್ಕಾರದಿಂದ ಕಾಯ್ದೆ. ಸರ್ಕಾರದಿಂದ ಕೆಲ ಲೋಪದೋಷ ಸರಿಪಡಿಸುವ ಭರವಸೆ. ನಮ್ಮದು ರೈತರು , ಕೂಲಿ ಕಾರ್ಮಿಕರಿಗೆ ಸಮರ್ಪಿತ ಸರ್ಕಾರ. 60 ವರ್ಷ ಆಳಿದವರು ರೈತರನ್ನು ಹೇಗಿಟ್ಟಿದ್ದಾರೆಂದು ಗೊತ್ತು. ರೈತರು ವಿರೋಧ ಪಕ್ಷಗಳ ಚಕ್ರವ್ಯೂಹಕ್ಕೆ ಸಿಲುಕಬಾರದು ಎಂದು ತಿಳಿಸಿದ್ದಾರೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ