ಬೆಂಗಳೂರಿಗರು ಇಂದು ಸಂಜೆಯೂ ಮನೆಯೊಳಗೇ ಇರಿ!

ಶನಿವಾರ, 9 ಸೆಪ್ಟಂಬರ್ 2017 (10:31 IST)
ಬೆಂಗಳೂರು: ನಿನ್ನೆ ರಾತ್ರಿ ಸುರಿದ ಮಹಾ ಮಳೆಗೆ ರಾಜ್ಯ ರಾಜಧಾನಿಯಲ್ಲಿ ಎಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ ಎಂದು ನೀವು ನೋಡಿದ್ದೀರಿ. ಇಂದೂ ಮಧ್ಯಾಹ್ನದ ನಂತರ ಮತ್ತೆ ಮಹಾ ಮಳೆಯಾಗುವ ಸಾಧ್ಯತೆಯಿದೆ.

 
ಇಂದು ಮಧ್ಯಾಹ್ನದ ನಂತರವೂ ಬೆಂಗಳೂರಲ್ಲಿ ಮಹಾ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರನ್ ಮೇತ್ರಿ ಹೇಳಿದ್ದಾರೆ. ಉತ್ತರ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಮತ್ತೆ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ನಿನ್ನೆಯ ಮಳೆಗೆ ನಾಲ್ವರು ಜೀವ ಕಳೆದುಕೊಂಡಿದ್ದರು. ಅಲ್ಲದೆ, ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಕ್ಷರಶಃ ನರಕ ಸದೃಷವಾಗಿದೆ. ಇಂದು ಮತ್ತೆ ಮಳೆಯಾದರೆ ಇನ್ನೆಷ್ಟು ಅನಾಹುತವಾಗುತ್ತೋ? ಹಾಗಾಗಿ ಇಂದು ಸಂಜೆಯೂ ಆದಷ್ಟು ಮಳೆಗೆ ಹೊರ ಹೋಗುವ ದುಸ್ಸಾಹಸ ಮಾಡದಿರಿ.

ಇದನ್ನೂ ಓದಿ.. ಗೌರಿ ಲಂಕೇಶ್ ಹತ್ಯೆ ತನಿಖೆ ಎಲ್ಲೀವರೆಗೆ ಬಂತು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ